28 August 2026
National

ಮಹೇಂದ್ರಗಢ: ಶಾಲೆ ಬಸ್ ಪಲ್ಟಿ – ಐವರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ!

Swabhimananews.Com

– ಏಪ್ರಿಲ್-11-2024

ಹೊಸದಿಲ್ಲಿ: ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಅಪಘಾತಕ್ಕೆ ಸಿಲುಕಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಹರಿಯಾಣದ ಮಹೇಂದ್ರಗಢದಲ್ಲಿ ನಡೆದಿದೆ.

ಮಹೇಂದ್ರಗಢದ ಉನ್ಹಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 15 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಿಆರ್ ಎಲ್ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್, ಎದುರಲ್ಲಿದ್ದ ಮತ್ತೊಂದು ವಾಹನವನ್ನು ಹಿಂದಕ್ಕೆ ಹಾಕುವ ಪ್ರಯತ್ನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಸ್ ನಲ್ಲಿ ನಾಲ್ಕನೇ ತರಗತಿಯಿಂದ 10ನೇ ತರಗತಿಯವರೆಗಿನ ಸುಮಾರು 35ರಿಂದ 40 ವಿದ್ಯಾರ್ಥಿಗಳು ಇದ್ದರು
ಗಾಯಗೊಂಡ ಮಕ್ಕಳು ಪ್ರಸ್ತುತ ತುರ್ತು ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ. ಹೆಚ್ಚು ತೀವ್ರತರವಾದ ಪ್ರಕರಣಗಳನ್ನು ರೇವಾರಿಯಲ್ಲಿರುವ ವಿಶೇಷ ಸೌಲಭ್ಯಕ್ಕೆ ವರ್ಗಾಯಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಮೃತರು ಮತ್ತು ಗಾಯಗೊಂಡ ವಿದ್ಯಾರ್ಥಿಗಳ ಗುರುತು ಪತ್ತೆಯಾಗಿಲ್ಲ. ಶಾಲಾ ಬಸ್ ಚಾಲಕನಿಗೂ ಗಾಯಗಳಾಗಿವೆ.

Related posts

ಮಹಿಳಾ ಹತ್ಯೆ ಕೇಸ್ ನಲ್ಲಿ 9 ಮಂದಿ ಅರೆಸ್ಟ್ : ನಾಗಾ ಪ್ರದೇಶ ಬಂದ್…

Swabhimana News Desk

ಸಿಪಿಐ-ಎಂ ಪಕ್ಷದ ಹಿರಿಯ ನಾಯಕ ಸೀತಾರಾಂ ಯೆಚೂರಿ ಇನ್ನಿಲ್ಲ.

Swabhimana News Desk

ದುಬೈನಲ್ಲಿ ಭಾರಿ ಮಳೆ: ವಿಮಾನಗಳ ಹಾರಾಟ ಸ್ಥಗಿತ, ಒಮಾನ್ನಲ್ಲಿ 18 ಮಂದಿ ಸಾವು ದುಬೈನಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆಯಾಗುತ್ತಿದ್ದು ವಿಮಾನ ನಿಲ್ದಾಣ  ಜಲಾವೃತಗೊಂಡಿದೆ.

Swabhimana News Desk

Leave a Comment