10 November 2025
Coastal

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು


swabhimananews.com- ಏಪ್ರಿಲ್ -11-2024

ಕುಂದಾಪುರ ಇಲ್ಲಿನ ಬೊಬ್ಬರ್ಯನಕಟ್ಟೆ ಎದುರಿನ ಪ್ಲೈಓವರ್ ಮೇಲೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಆರು ಅಡಿ ಕೆಳಗಿನ ಸರ್ವಿಸ್ ರಸ್ತೆ ಉರುಳಿ ಬಿದ್ದು, ಪತಿ- ಪತ್ನಿ ಮೃತಪಟ್ಟಿದ್ದು 1. ಪುತ್ರ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಅಪರಾಹ್ನ 1.15ರ ಸುಮಾರಿಗೆ ಸಂಭವಿಸಿದೆ.
ಕಾರು ಚಲಾಯಿಸುತ್ತಿದ್ದ ಕೇರಳದ ಕಣ್ಣೂರು ಮೂಲದ ಮುನ್ನವರ್ (49) ಅವರ ಪತ್ನಿ ಸಮೀರಾ (41) ಮೃತಪಟ್ಟವರು. ಕಾರಿನಲ್ಲಿದ್ದ ಪುತ್ರ ಸುಹೈಲ್ (18) ತೀವ್ರ ಗಾಯ ಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಲೈಓವರ್ ಕೆಳಗಿ ಉರುಳಿ ಬಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ,

ವಿವರ
ಮಂಗಳವಾರ ಅಪರಾಹ್ನ 1.15 ರ ಸುಮಾರಿಗೆ ಮುನ್ನವರ್ ಅವರ ಹುಟ್ಟೂರುಕೊಲ್ಲಾಪುರದಿಂದಸಮೀರಾ ಅವರ ತವರಾದ ಕಣ್ಣೂರಿಗೆ ಇವರು ತೆರಳುತ್ತಿದ್ದರು. ಕುಂದಾಪುರದ
ಸರ್ವಿಸ್ ರಸ್ತೆಗೆ ಮಗುಚಿ ಬಿದ್ದಿದೆ.

ಕಾರಿನಲ್ಲಿದ್ದ ಸಮೀರಾ ಕುಂದಾಪುರದ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟರೆ ಪತಿ ಮುನ್ನವರ್ ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ವೃತ್ತ ನಿರೀಕ್ಷಕ ನಂದ ಕುಮಾರ್, ಸಂಚಾರ ಠಾಣಾ ಎಸ್ ಐಗಳಾದ ನವೀನ್ ನಾಯ್ಡ್ ಸಾವಿತ್ರಿ ನಾಯಕ್ ಹಾಗೂ ಸಿಬಂದಿ ಭೇಟಿ ನೀಡಿದರು. ಚಾಲಕನ ವೇಗದ, ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನುವುದಾಗಿ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Swabhimananews. Com

Related posts

ಬೋಧಿಸತ್ವ ಬುದ್ಧ ವಿಹಾರದಲ್ಲಿ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿಧ್ಯಾನ  ನಡೆಯಿತು.

Swabhimana News Desk

ಕೋಟತಟ್ಟು ಗ್ರಾಮದಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ, ಜನವಸತಿ ಪ್ರದೇಶದಲ್ಲಿ, ಗ್ರಾಮಸ್ಥರಿಗೆ ಮಾರಕ ವಾಗಿರುವ ಜನತಾ ಫಿಶ್ ಮಿಲ್ಲ್ ಬಂದ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ.ಮತ್ತು RPIK ಪಕ್ಷ ಚುನಾವಣಾಧಿಕಾರಿಗೆ ದೂರು.

Swabhimana News Desk

ಬೋಧಿಸತ್ವ ಬುದ್ಧವಿಹಾರ ಹಾವಂಜೆ. ಉಡುಪಿ ಜಿಲ್ಲೆ.ಇಲ್ಲಿ ದಿನಾಂಕ 06-10-2024 ರಂದು ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ, ಮುಂದಿನ ಬೌದ್ಧ ಧಮ್ಮದ ಪ್ರಚಾರ ಹಾಗೂ ವಿಸ್ತರದ ಬಗ್ಗೆ ಗಂಭೀರ ಚರ್ಚೆ, ಚಿಂತನೆ

Swabhimana News Desk

Leave a Comment