23 July 2026
Karnataka

ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಬಾಲಕಿಗೆ ಹಗ್ಗ ಸುತ್ತಿಕೊಂಡು ಮೃತ್ಯು..!!

ಡಿಸೆಂಬರ್- 09-2024 swabhimaananews

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಬಾಲಕಿಗೆ ಹಗ್ಗ ಸುತ್ತಿಕೊಂಡು ಪ್ರಾಣಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಬಂಟ್ವಾಳ ‌ತಾಲೂಕಿನ‌ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಸಂಭವಿಸಿದೆ ‌

ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ ಜೋಕಾಲಿಗೆ ಬಲಿಯಾದ ಬಾಲಕಿ ಎಂದು ತಿಳಿಯಲಾಗಿದೆ.
ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಈ ಘಟನೆ ನಡೆದಿದೆ.

ವಿಟ್ಲ ಪೋಲಿಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Swabhimaananews

Related posts

ಹೆಚ್‌.ಡಿ. ರೇವಣ್ಣ , ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ.ಪ್ರಕರಣ ದಾಖಲು!

Swabhimana News Desk

ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಉಚ್ಚಾಟನೆ

Swabhimana News Desk

ದಲಿತರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರಕಾರ.ನೈತಿಕ ಹೊಣೆ ಹೊತ್ತು. ಸಮಾಜಕಲ್ಯಾಣ ಸಚೀವ ಡಾ.ಹೆಚ್ ಸಿ ಮಹದೇವಪ್ಪ ರಾಜಿನಾಮೆಗೆ RPIK ಮತ್ತು ಕದಸಂಸ ಭೀಮವಾದ ಆಗ್ರಹ.

Swabhimana News Desk

Leave a Comment