10 November 2025
Coastal

ಹಾವಂಜೆಯಲ್ಲೊಂದು ದೇಸೀಯ ಶೈಲಿಯ ಚಿಣ್ಣರ ಬೇಸಿಗೆ ಶಿಬಿರ. ಬಾಲಲೀಲಾ-2024.

Swabhimananews -ಏಪ್ರಿಲ್-11-2024

ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇದರ ಆಯೋಜಕತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ನಾಲ್ಕು ದಿನದ ಚಿಣ್ಣರ ಬೇಸಿಗೆ ಶಿಬಿರ ದಿನಾಂಕ 11/04/2024 ರಂದು ಉದ್ಘಾಟನೆ ಗೊಂಡಿತು.

ಮಕ್ಕಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ರಜೆಯನ್ನು ಇನ್ನಷ್ಟು ಮಜವಾಗಿಸಲು ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಹಲವಾರು ಕಲಾ ಸಂಬಂಧಿತ ವಿಷಯಗಳ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗ್ರಾಮೀಣ ಪರಿಸರದಲ್ಲಿ ಕಲಿಸುವ ನಿಟ್ಟಿನಲ್ಲಿ ನಾಲ್ಕು ದಿನದ ಶಿಬಿರವನ್ನು ಏರ್ಪಡಿಸಲಾಗಿದೆ

ಗ್ರಾಮೀಣ ಭಾಗದ ಪ್ರಶಾಂತ ಪರಿಸರದಲ್ಲಿ ಕರಕುಶಲ ಕಲೆ, ಸಂಗೀತ, ಅಭಿನಯ, ದೇಶೀಯ ಆಟಗಳು, ಪಕ್ಷಿ ವೀಕ್ಷಣೆ, ಸರೀಸೃಪಗಳ ಪರಿಚಯ, ಮನೆ ಮದ್ದುಗಳು, ಮಕ್ಕಳ ಸಿನೇಮಾ ಮುಂತಾದ ಅನೇಕ ವಿಷಯಗಳ ಸೃಜನಶೀಲ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ..

ಶಿಬಿರದಲ್ಲಿ ಮಕ್ಕಳ ಚಲನಚಿತ್ರ, ಸಂಗೀತ, ಚಿತ್ರಕಲೆ, ಜಾಲಿ ಪ್ರೇಂ ಹಾಗೂ ಮಂಜೂಷಾ ಕಲೆ(ಬಿಹಾರ), ಆವೆಮಣ್ಣಿನ ಶಿಲ್ಪ, ಮುಖವರ್ಣಿಕೆ, ಕಸದಿಂದ ರಸ ಕ್ರಾಫ್ಟ್, ದೇಶೀಯ ಆಟಗಳು, ಕಸೂತಿ ಕಲೆ, ಹೂಗಳ ತಯಾರಿ, ವ್ಯಂಗ್ಯ ಚಿತ್ರಣ, ರೂಬಿಕ್ಸ್ ಕ್ಯೂಬ್ ಮುಂತಾದ ಹಲವಾರು ವಿಷಯಗಳ ಆಯೋಜಿಸಲಾಗಿದೆ ಎಂದು ಶಿಬಿರ ದ ಆಯೋಜಕರಾದ ಡಾ.ಜನಾರ್ದನ ರಾವ್ ಹಾವಂಜೆ ತಿಳಿಸಿದರು.

ಶಿಬಿರವು ದಿನಾಂಕ 11/04/2024 ರಿಂದ 14/04/2024 ರ ವರೆಗೆ ನಡೆಯಲಿದ್ದು 14/04/2024 ರಂದು ಸಮಾರೋಪಗೊಳ್ಳಲಿದೆ.

Swabhimananews

Related posts

ಬೋಧಿಸತ್ವ ಬುದ್ಧವಿಹಾರ ಹಾವಂಜೆ. ಉಡುಪಿ ಜಿಲ್ಲೆ.ಇಲ್ಲಿ ದಿನಾಂಕ 06-10-2024 ರಂದು ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ, ಮುಂದಿನ ಬೌದ್ಧ ಧಮ್ಮದ ಪ್ರಚಾರ ಹಾಗೂ ವಿಸ್ತರದ ಬಗ್ಗೆ ಗಂಭೀರ ಚರ್ಚೆ, ಚಿಂತನೆ

Swabhimana News Desk

ಮಾಜಿ ಶಾಸಕ ಬಸವರಾಜ್ ಅವರನ್ನು ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

Swabhimana News Desk

ನೀಟ್ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಯಲ್ಲಿ ನಕಲಿ ಅಂಕಪಟ್ಟಿ ಜಾಲ ಶಂಕೆ.

Swabhimana News Desk

Leave a Comment