19 C
New York
13 September 2025
Specials

ಕೊಕ್ಕರ್ಣೆಯಲ್ಲಿ ಹುಚ್ಚುಪ್ರೇಮಿಯಿಂದ ಯುವತಿಗೆ ಚೂರಿ ಇರಿತ ಯುವತಿ ಗಂಭೀರ.!

ಉಡುಪಿ :ಸೆಪ್ಟೆಂಬರ್-12-2025
Swabhimananews

ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆಯಲ್ಲಿ ಹುಚ್ಚು ಪ್ರೇಮಿಯೊಬ್ಬ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆಗೈಯಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.


ಯುವತಿಯನ್ನು ಕೊಕ್ಕರ್ಣೆ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ (20) ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಕಾರ್ತಿಕ್ ಪೂಜಾರಿ ಎಂಬಾತ ಬೈಕಿನಲ್ಲಿ ಬಂದು ಏಕಾ ಏಕಿ ನೇರವಾಗಿ ಚೂರಿಯಿಂದ ಇರಿದಿದ್ದು ಯುವತಿಗೆ ತೀವ್ರ ರಕ್ತ ಸ್ರಾವವಾಗಿದ್ದು ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇವತ್ತು ಯುವತಿಯ ಹುಟ್ಟುಹಬ್ಬವಾಗಿದ್ದು ಹುಟ್ಟಿದ ದಿನವೇ ಯುವತಿಯನ್ನು ಕೊಲೆಗೈಯುವ ಉದ್ದೇಶದಿಂದ ಯುವತಿಗೆ ಚೂರಿ ಇರಿದು ಯುವಕ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು ಯುವತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
Swabhimananews

Related posts

ಕೇವಲ 35 ಪಾಸ್‌ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!
ತುಷಾರ್ ಸುಮೇರಾ ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

Swabhimana News Desk

RSS ಗಣವೇಷದಲ್ಲೇ ಬಂದು ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತ!

Swabhimana News Desk

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಸ್ವಸಹಾಯ ಸಂಘದ ಸಾಲ ವಸೂಲಾತಿ ನೆಪದಲ್ಲಿ ದಲಿತರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ,ಅವಾಚ್ಯ ಪದಗಳಿಂದ ಜಾತಿ ನಿಂದನೆ. ಕಾನೂನು , ಮಾಹಿತಿ ನೀಡಲು ಬಂದ ಸಂಚಾರಿ ಯೂಟ್ಯೂಬ್ ಚಾನೆಲ್ ಸಿಬ್ಬಂದಿಗಳ ವಿರುದ್ಧವೂ ಹಲ್ಲೆಗೆ ಯತ್ನ.ದೂರು ನೀಡಿ 15 ದಿನ ಕಳೆದರೂ ಇದು ವರೆಗೂ ಯಾವುದೇ ಕಾನೂನು ಕ್ರಮ ಕೈ ಕೊಳ್ಳದ ಇಲಾಖೆಗಳು.

Swabhimana News Desk

Leave a Comment