26.8 C
New York
26 June 2025
Coastal

ಹಾವಂಜೆ ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ.

ಮೇ 12-2024 swabhimananews

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ.ಅಮೃತ ಗ್ರಾಮ ಪಂಚಾಯತ್ ಹಾವಂಜೆ, ಗ್ರಂಥಾಲಯ ಮತ್ತು ಅರಿವು ಕೆಂದ್ರ, ಗ್ರಾಮ ಡಿಜಿ ವಿಕಸನ, ಶಿಕ್ಷಣ ಪೌಂಡೇಶನ್ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಹಾವಂಜೆ ಗ್ರಾಮ ಪಂಚಾಯತ್ ‘ಅಮೃತ ಭವನ’ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಶಿಕ್ಷಣ ಪೌಂಡೇಶನ್ ನ ಜಿಲ್ಲಾ ಸಂಯೋಜಕರಾದ ಶ್ರೀಮತಿ ರೀನಾ ಎಸ್. ಹೆಗ್ಡೆ ಯವರು ಶಿಬಿರವನ್ನು ಉದ್ಘಾಟಿಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಅಜೆಕಾರು ಶಾಲಾ ಶಿಕ್ಷಕಿ ಶ್ರೀಮತಿ ಶಿಲ್ಪಾ, ಪಂಚಾಯತ್ ಸಿಬ್ಬಂದಿ ಶ್ರೀ ಸದಾಶಿವ ಹಾಗೂ ಶರಣ್ ಆಚಾರ್ಯ, ಶ್ರೀ ಶರತ್ ಎಸ್ ಹಾವಂಜೆ, ಶ್ರೀ ಯೋಗೀಶ್ ಕೊಳಲಗಿರಿ, ಶ್ರೀ ದೇವರಾಜ್ ಪಾಣ, ಡಾ. ಜನಾರ್ಧನ್ ರಾವ್, ಗಣೇಶ್ ಪೂಜಾರಿ ಹಾಗೂ ಪ್ರಥ್ವಿ ಒಳಗುಡ್ಡೆ ಯವರು ವಿವಿಧ ವಿಷಯಗಳ ಬಗ್ಗೆ ಮಕ್ಕಳಿಗೆ ಮನೊರಂಜನೆ ಹಾಗೂ ಜ್ಞಾನಾರ್ಜನ ನೀಡಿದರು. ಶಿಬಿರದ 55 ಮಕ್ಕಳನ್ನು ಮನೋರಂಜನಾ ಪ್ರವಾಸಕ್ಕೆ ಕರೆದುಕೊಂಡುಹೋಗಿದ್ದು ವಿಶೇಷವಾಗಿತ್ತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಕಾರ್ತಿಬೈಲು ವಹಿಸಿದ್ದರು. ಮುಖ್ಯ ಅತಿಥಿ ಬ್ರಹ್ಮಾವರ ತಾಲೂಕು ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ನವೀನ್ ಕುಮಾರ್ ಭಂಡಾರಿಯವರು ಹಾವಂಜೆ ಗ್ರಾಮ ಪಂಚಾಯತ್ ಗ್ರಂಥಾಲಯ ಉಡುಪಿ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ ಹಾಗೂ ಬ್ರಹ್ಮಾವರ ತಾಲೂಕಿಗೆ ಹೆಮ್ಮೆ ತಂದಿದೆ ಎಂದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಮಹೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ದಿವ್ಯ ಎಸ್. ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸುಮತಿ ಇವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶಿಬಿರದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಬಿರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಸಪಂನ್ಮೂಲ ವ್ಯಕ್ತಿಗಳಿಗೆ ಹಾಗೂ ಶಿಬಿರದ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿದ ದಾನಿಗಳನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀ ಉದಯ ಕೋಟ್ಯಾನ್, ಕಾರ್ಯದರ್ಶಿಯವರಾದ ಶ್ರೀಮತಿ ವಿಮಲಾಕ್ಷಿ ಶೆಟ್ಟಿ, ಪಂಚಾಯತ್ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಕುಮಾರಿ ಪ್ರಜ್ಞಾ ಹಾಗೂ ಮಾನ್ಯಶ್ರೀಯವರು ಶಿಬಿರದಲ್ಲಿ ನಡೆದ ಚಟುವಟಿಕೆಗಳ ಪಿಪಿಟಿ ಯನ್ನು ಪ್ರಸ್ತುತಪಡಿಸಿದರು. ಸಭಾಕಾರ್ಯಕ್ರಮದ ನಂತರ ಶಿಬಿರದ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಿಬಿರಾರ್ಥಿ ಕು. ಪ್ರಣೀತ ಸ್ವಾಗತಿಸಿದರು, ಶರಣ್ ಆಚಾರ್ಯ ವಂದನಾರ್ಪಣೆ ಗೈದರು, ವಿ. ಆರ್. ಶ್ರೇಯ ಹಾಗೂ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು ಪಂಚಾಯತ್ ಸಿಬ್ಬಂದಿ ಶ್ರೀ ಸದಾಶಿವ ಕಾರ್ಯಕ್ರಮ ಸಂಯೋಜಿಸಿದರು.

Swabhimananews

Related posts

ಕಾಲೇಜು ವಿಡಿಯೋ ಪ್ರಕರಣ: ಸ್ವತಂತ್ರ ತನಿಖೆಯ ನಿಟ್ಟಿನಲ್ಲಿ ಸಿಐಡಿ ಗೆ ಹಸ್ತಾಂತರ. ಲಕ್ಷ್ಮೀ ಹೆಬ್ಬಾಳ್ಕರ್

Swabhimana News Desk

ನಮೋ ತಸ್ಸಾ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ

Swabhimana News Desk

ಶ್ರೀಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನ ಅಕ್ರಮ.ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕುಳಾಯಿ ಬಂದರು ಕಾಮಗಾರಿ ಪ್ರದೇಶಕ್ಕೆ ದಿಡೀರ್ ದಾಳಿ.

Swabhimana News Desk

Leave a Comment